Posts

Showing posts from October, 2018

ಜೀವನಕ್ಕಾಗಿ_ಖರ್ಚಾ_ಅಥವಾ_ಖರ್ಚಿಗಾಗಿ_ಜೀವನ

ಹೆಂಡತಿ ಹೇಳಿದಳು - ರೀ ಇವತ್ತು ಪದೆ ಪದೆ ಬಟ್ಟೆ ಬದಲಿಸ ಬೇಡಿ.... ಯಜಮಾನ - ಯಾಕೆ ? ಹೆಂಡತಿ- ನಮ್ಮ ಮನೆ ಕೆಲಸದವಳು 3 ದಿನ ರಜೆಗೆ ಹೋಗುತ್ತಾಳೆ. ಯಜಮಾನ - ಯಾಕೆ ? ಹೆಂಡತಿ - ನಾವು ಅವಳಿಗೆ ಗಣಪತಿ ಹಬ್ಬಕ್ಕೆ ರಜೆ ಕೊಟ್ಟಿಲ್ಲ ನಮ್ಮ ಮನೆ ಕೆಲಸ ಹೆಚ್ಚಿದೆ ಎಂದು ಆದರಿಂದ ಅವಳು ಅವಳ ಮಗಳ ಮನೆಗೆ ಹೋಗಿಲ್ಲ ಈಗ ಹೋಗಿ ಮಮ್ಮಗಳನ್ನು ನೋಡಿ ಬರುತ್ತೇನೆ.... ನೆನಪಾಗುತ್ತಿದೆ ಎನ್ನುತ್ತಿದ್ದಳು ಅದಕ್ಕೆ ಹೋಗಿ ಬಾ ಎಂದೇ. ಯಜಮಾನ - ಹು.... ಕಣೆ ಸರಿ ಜಾಸ್ತಿ ಬಟ್ಟೆ ಬಳಸುವುದಿಲ್ಲ. ಹೆಂಡತಿ - ರೀ...... ಮತ್ತೆ ನಾನು ಅವಳಿಗೆ ಗಣಪತಿ ಹಬ್ಬದ ಬೋನಸ್ ಆಗಿ 500 ಕೊಡಲಾ? ಯಜಮಾನ - ಈಗ ದೀಪಾವಳಿ ಬರ್ತಾ ಇದೆಯಲ್ಲಾ ಆವಾಗ ಕೊಡೋಣ. ಹೆಂಡತಿ - ಇಲ್ಲ ರೀ, ಪಾಪ ಅವಳು ಕಡೂ ಬಡವಳು ಮಗಳ ಮನೆಗೆ ತನ್ನ ಮಮ್ಮಗಳನ್ನು ನೋಡಲು ಹೋಗುತ್ತಿದ್ದಾಳೆ ಕಣ್ರೀ, ಈಗಿನ ದುಭಾರಿ ದುನಿಯಾದಲ್ಲಿ ಪಾಪ ಅವಳ ಸಂಬಳದಲ್ಲಿ ಏನು ಖರೀದಿ ಮಾಡಲು ಸಾಧ್ಯ? ಮಮ್ಮಗಳನ್ನು ನೋಡಲು ಹೋಗುತ್ತಿದ್ದಾಳೆ ಪಾಪ ಕಣ್ರೀ. ಯಜಮಾನ - ನೀನು ಅವಶ್ಯಕತೆಗಿಂದ ಹೆಚ್ಚು ಜನರ ಪಾಪ ನೋಡ್ತಿಯ. ಹೆಂಡತಿ - ರೀ...... ಚಿಂತಿಸಬೇಡಿ ನಾನು ಇವತ್ತು ಪಿಜ್ಜಾ ತಿನ್ನುವ ಕಾರ್ಯಕ್ರಮ ಕ್ಯಾನ್ಸಲ್ ಮಾಡಿ ಬಿಡುತ್ತೇನೆ...ಸುಮ್ನೆ ಯಾಕೆ ಆ ಎಂಟು ರೊಟ್ಟಿಯ ತುಂಡಿನ ಹಿಂದೆ 500 ರೂಪಾಯಿ ಹಾಕುವುದು ಅಲ್ವಾ ? ಯಜಮಾನ -  ವಾರೇ ವ್ಹಾ.... ನಮ್ಮ  ಬಾಯಿಂದ ಪಿಜ್ಜಾ ಕಸಿದು ಕೆಲಸದವಳಾಕ...

ಇತಿಹಾಸದ ಪ್ರಮುಖ ಕಾಲಾವಳಿಗಳು

ಇತಿಹಾಸದ ಪ್ರಮುಖ ಕಾಲಾವಳಿಗಳು *⏰ಕ್ರಿ.ಪೂ.2005-1500 ಹರಪ್ಪ ನಾಗರಿಕತೆ.* *⏰ಕ್ರಿ.ಪೂ.1500 ಭಾರತದ ಮೇಲೆ ಆಯ್ರರ ದಾಳಿ.* *⏰ಕ್ರಿ.ಪೂ.1000 ಕಬ್ಬಿಣದ ಬಳಕೆ.* *⏰ಕ್ರಿ.ಪೂ.1000-500 ವೇದಗಳ ಕಾಲ.* *⏰ಕ್ರಿ.ಪೂ.563-483 ಗೌತಮ ಬುದ್ಧನ ಕಾಲ.* *⏰ಕ್ರಿ.ಪೂ.540-468 ಮಹಾವೀರನ ಕಾಲ.* *⏰ಕ್ರಿ.ಪೂ.542-490 ಹರ್ಯಂಕ ಸಂತತಿ.* *⏰ಕ್ರಿ.ಪೂ.413-362 ಶಿಶುನಾಗ ಸಂತತಿ.* *⏰ಕ್ರಿ.ಪೂ.362-324 ನಂದ ಸಂತತಿ.* *⏰ಕ್ರಿ.ಪೂ.327-325 ಭಾರತದ ಮೇಲೆ ಅಲೆಗ್ಜಾಂಡರನ ಧಾಳಿ.* *⏰ಕ್ರಿ.ಪೂ.324-183 ಮೌರ್ಯ ಸಂತತಿ.* *⏰ಕ್ರಿ.ಪೂ.324-298 ಚಂದ್ರಗುಪ್ತ ಮೌರ್ಯನ ಕಾಲ.* *⏰ಕ್ರಿ.ಪೂ.298-273 ಬಿಂದುಸಾರನ ಕಾಲ.* *⏰ಕ್ರಿ.ಪೂ.273-232 ಅಶೋಕ ಸಾಮ್ರಾಟನ ಕಾಲ.* *⏰ಕ್ರಿ.ಪೂ.185-147 ಶುಂಗ ಸಂತತಿ.* *⏰ಕ್ರಿ.ಪೂ.73-28 ಕಣ್ವರ ಆಳ್ವಿಕೆ.* *⏰⏱ಕ್ರಿ.ಪೂ.235-ಕ್ರಿ ಶ.225 ಶಾತವಾಹನರವ ಆಳ್ವಿಕೆಯ ಕಾಲ.* *⏰ಕ್ರಿ.ಪೂ.155 ಗ್ರೀಕ್ ಮಿನಾಂಡರ್ ನ ಭಾರತದ ಮೇಲಿನ ಧಾಳಿ.* *⏰ಕ್ರಿ.ಪೂ.58-57 ವಿಕ್ರಮ ಸಂವತ್ಸರ( ವಿಕ್ರಮಾದಿತ್ಯ ನಿಂದ)* *⏱ಕ್ರಿ.ಶ.78-101 ಕಾನಿಷ್ಕನ ಕಾಲ.* *⏱ಕ್ರಿ.ಶ.78 ಶಕ ಸಂವತ್ಸರ* *⏱ಕ್ರಿ.ಶ.320-540 ಗುಪ್ತ ಸಾಮ್ರಜ್ಯ.* *⏱ಕ್ರಿ.ಶ.335-375 ಸಮುದ್ರಗುಪ್ತನ ಆಳ್ವಿಕೆ.* *⏱ಕ್ರಿ.ಶ.405-411 ಭಾರತದಲ್ಲಿ ಫಾಹಿಯಾನ.* *⏱ಕ್ರಿ.ಶ.535-757 ಬದಾಮಿಯ ಚಾಲುಕ್ಯರು.* *🔛📜 ...

ಪ್ರಪಂಚದ ಸರೋವರಗಳು ಮತ್ತು ದೇಶಗಳು

🔴 ಪ್ರಪಂಚದ ಸರೋವರಗಳು ಮತ್ತು ದೇಶಗಳು *.ಕ್ಯಾಸ್ಪೀಯನ ಸರೋವರ-  ಇರಾನ್ *.ಸುಪೇರೀಯರ ಸರೋವರ-  ಅಮೆರಿಕ *.ವಿಕ್ಟೋರಿಯಾ ಸರೋವರ-   ತಂಜೇನಿಯ *.ಯೂರಲ್ ಸರೋವರ-  ರಷ್ಯ *.ಮಿಚಿಗನ್ ಸರೋವರ-  ಅಮೆರಿಕ *.ಬೈಕಲ್ ಸರೋವರ-  ರಷ್ಯ *.ಗ್ರೇಟಬೀಯರ ಸರೋವರ-  ಕೆನಡಾ *.ಲದೂಗ ಸರೋವರ-  ರಷ್ಯ *.ಮಾನಸ ಸರೋವರ-  ಟಿಬೆಟ್ *.ಸೋಸೇಕುರ ಸರೋವರ-  ಟಿಬೆಟ್ *.ಟಿಟಿಕಾಕ ಸರೋವರ-  ಪೆರು *.ರುಡಾಲ್ಫ್ ಸರೋವರ-  ಕೀನ್ಯಾ *.ನ್ಯಾಸ ಸರೋವರ-  ತಾಂಜೇನಿಯ *.ವಾನೇರ್ಸ ಸರೋವರ-  ಸ್ವಿಡನ

ಚೈತನ್ಯರ ತ್ಯಾಗ*

                   ಚೈತನ್ಯರ ತ್ಯಾಗ* ಚೈತನ್ಯ ಮಹಾಪ್ರಭು ಬಂಗಾಳ ಹಾಗೂ ನಮ್ಮ ದೇಶ ಕಂಡ ಮಹಾನ್ ಸಂತ, ಭಕ್ತಿಪಂಥದ ಬಹುದೊಡ್ಡ ಪ್ರಚಾರಕ, ಪರಮ ದೈವಭಕ್ತ ಮತ್ತು ಶಾಸ್ತ್ರಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದ ವಿದ್ವಾಂಸ.  ಒಂದು ದಿನ ಬೇರೆ ಊರಿಗೆ ಪ್ರವಾಸ ಹೊರಟಿದ್ದ ಚೈತನ್ಯರು ನದಿಯನ್ನು ದಾಟಬೇಕಿತ್ತು. ಅಂಬಿಗ ನಾವೆಯನ್ನು ದಂಡೆಗೆ ತಂದೊಡನೆ ಚೈತನ್ಯರು ಏರಿ ಕುಳಿತರು. ಸ್ವಲ್ಪ ಸಮಯದಲ್ಲಿ ನಾವೆ ಭರ್ತಿ­ಯಾಯಿತು. ನಾವೆ ಹೊರಟಿತು. ಅಂಬಿಗನಿಗೆ ನಾವೆಯಲ್ಲಿದ್ದ ಬಹುತೇಕ ಜನ ಪರಿಚತರೇ. ಅವನು ಅವರೊಂದಿಗೆ ತಮಾಷೆ ಮಾಡುತ್ತ ಹರಟೆ ಹೊಡೆ­ಯುತ್ತಿದ್ದ. ಆಗ ಯಾರೋ ಚೈತನ್ಯರ ಹೆಗಲಮೇಲೆ ಕೈ ಇಟ್ಟಂತಾಯಿತು. ತಿರುಗಿ ನೋಡಿದರೆ ಅಲ್ಲಿ ಗದಾಧರ ನಿಂತಿದ್ದಾನೆ. ಗದಾಧರ ಚೈತನ್ಯರ ಬಾಲ್ಯಸ್ನೇಹಿತ. ಇಬ್ಬರೂ ಜೊತೆಗೆ ಶಾಲೆಗೆ ಹೋದವರು, ಆಟ ಆಡಿದ­ವರು. ಈಗ ಅವನನ್ನು ಎಷ್ಟೋ ವರ್ಷಗಳ ನಂತರ ಕಾಣುತ್ತಿದ್ದಾರೆ. ಒಬ್ಬರನೊಬ್ಬರು ಅಪ್ಪಿಕೊಂಡರು, ಹಳೆಯ ನೆನಪುಗಳನ್ನು ತಾಜಾ ಮಾಡಿ­ಕೊಂಡರು. ಗದಾಧರ ಕೇಳಿದ, ‘ಚೈತನ್ಯ ಈಗ ಏನು ಮಾಡುತ್ತಿದ್ದೀ? ನಾವು ಗುರು­ಕುಲಕ್ಕೆ ಹೋಗುತ್ತಿದ್ದಾಗ ನೀನು ಅತ್ಯಂತ ಬುದ್ಧಿವಂತನಾಗಿದ್ದಿ. ನ್ಯಾಯಶಾಸ್ತ್ರದ ಮೇಲೊಂದು ಗ್ರಂಥ ರಚನೆ­ಮಾಡು­ತ್ತೇನೆಂದು ಹೇಳುತ್ತಿದ್ದಿ. ಗುರುಗಳು ಕೂಡ ನಿನಗೆ ಆಶೀರ್ವಾದ ಮಾಡಿ­ದ್ದರಲ್ಲ. ಆ ಗ್ರಂಥ ರಚನೆಯಾಯಿತೇ?’ ಚೈತನ್ಯರು ಮು...